Welcome To Savi Savi Nenapu

Naveen Chinthakaaya

Thursday, January 24, 2013

ಪಟ್ಟದಕಲ್ಲು - Karnataka

ಪಟ್ಟದಕಲ್ಲು 



ಬಾದಾಮಿ ತಾಲೂಕಿನಲ್ಲಿರುವ ಪಟ್ಟದಕಲ್ಲು ಪುಟ್ಟಹಳ್ಳಿ. ಬಾದಾಮಿಯಿಂದ 22 ಕಿ.ಮೀ ದೂರದಲ್ಲಿ ಮಲಪ್ರಭಾ ನದಿಯ ಎಡದಂಡೆಯಲ್ಲಿರುವ ಐತಿಹಾಸಿಕ ಪ್ರಸಿದ್ಧ ಸ್ಥಳವೇ ಪಟ್ಟದಕಲ್ಲು. ಚಾಲುಕ್ಯರು ಬಾದಾಮಿಗೆ ಹತ್ತಿರ ಇರುವ ಈ ಸ್ಥಳದಲ್ಲಿ ತಮ್ಮ ಪಟ್ಟ ಬಂಧ ಮಹೋತ್ಸವ ನಡೆಸುತ್ತಿದ್ದರಿಂದ ಪಟ್ಟದಕಲ್ಲು ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಈ ಐತಿಹಾಸಿಕ ತಾಣವು ಇಂದು ದೇಶದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿ ಬೆಳೆದಿದೆ.

ಮಲಪ್ರಭಾ ನದಿ ಇಲ್ಲಿ ಉತ್ತರಗಾಮಿಯಾಗಿ ಪ್ರವಹಿಸುತ್ತಿರುವುದರಿಂದ ಇದನ್ನು ದಕ್ಷಿಣ ಕಾಶಿ'ಎಂದೂ ಕರೆಯುತ್ತಾರೆ. ಈ ಊರಿನಲ್ಲಿ ದ್ರಾವಿಡ ಮಾನಶೈಲಿಯ ಹಾಗೂ ನಾಗರ ಶೈಲಿಯ ದೇವಾಲಯಗಳು ಕಂಡು ಬರುತ್ತವೆ. ದ್ರಾವಿಡ ಮಾನಶೈಲಿಯಲ್ಲಿ ವಿರೂಪಾಕ್ಷ, ಮಲ್ಲಿಕಾರ್ಜುನ, ಜೈನ ದೇವಾಲಯಗಳಿದ್ದರೆ ನಾಗರ ಶೈಲಿಯಲ್ಲಿ ಗಳಗನಾಥ, ಕಾಶಿ ವಿಶ್ವೇಶ್ವರ, ಕಾಡಸಿದ್ದೇಶ್ವರ, ಜಂಬುಲಿಂಗ ದೇವಾಲಯಗಳಿವೆ. ಈ ಮೂಲಕ ಈ ಕ್ಷೇತ್ರವು ದೈವ ಭಕ್ತರಿಗೂ ಸಾಕಷ್ಟು ಹತ್ತಿರ ಎಂದು ಅನಿಸಿಬಿಟ್ಟಿದೆ.

ಎರಡು ಲಕ್ಷ ವರ್ಷಗಳ ಹಿಂದೆ ಹಿಮಯುಗದ ಅಂತ್ಯಭಾಗದಲ್ಲಿ ಹಳೇ ಶಿಲಾಯುಗದ ಸಂಸ್ಕೃತಿಯ ಜನರು ಈ ಭಾಗದಲ್ಲಿ ಇದ್ದರು ಎಂಬುದಕ್ಕೆ ಸಾಕ್ಷಿಯಾಗಿ ಮಲಪ್ರಭಾ ನದಿ ದಂಡೆಯ ಬಳಿ ಶಿಲಾಯುಗದ ಆಯುಧಗಳು ದೊರಕಿವೆ ಎಂದು ಇತಿಹಾಸ ಹೇಳುತ್ತದೆ. ಕಬ್ಬಿಣಯುಗದ ಶಿಲಾ ಸಂಸ್ಕೃತಿಯ ಕಲ್ಲಿನ ಕೋಣೆ, ಗೋರಿಗಳು, ಪಟ್ಟದ ಕಲ್ಲಿನ ಹತ್ತಿರ ಇರುವ ಚಾಚನ ಗುಡ್ಡದಲ್ಲಿ ಮತ್ತು ಅಕ್ಕರಗಲ್ ಗ್ರಾಮದ ಶಂಕರ ಗುಡ್ಡದ ಹತ್ತಿರದಲ್ಲೂ ದೊರೆತಿರುವುದಿರಿಂದ ಇತಿಹಾಸದ ಕುರಿತು ಆಸಕ್ತಿ ಹೊಂದಿರುವ ಸಾಕಷ್ಟು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಮೂರು, ನಾಲ್ಕನೆಯ ಶತಮಾನಗಳೆಂದು ಹೇಳಲಾಗುವ ಆಯುಧಗಳು ಸಂಗಮೇಶ್ವರ ದೇವಾಲಯದ ಮುಂದೆ ಹಾಗೂ ಜೈನ ದೇವಾಲಯದ ಮುಂದೆ ದೊರಕಿವೆ. ಪಟ್ಟದ ಕಲ್ಲಿನ ಪ್ರಮುಖ ಆಕರ್ಷಣೆ ವಿರೂಪಾಕ್ಷ ದೇವಾಲಯ ಇದನ್ನು ಚಾಲುಕ್ಯ ಇಮ್ಮಡಿ ವಿಕ್ರಮಾದಿತ್ಯ ಮೂರುಸಲ ಪಲ್ಲವರನ್ನು ಸೋಲಿಸಿ ಅವರ ರಾಜಧಾನಿಯಾದ ಕಂಚಿಯನ್ನು ವಶಪಡಿಸಿಕೊಂಡ ನೆನಪಿನಾರ್ಥವಾಗಿ ಅವರ ಮಹಾರಾಣಿಯರಾದ ಲೋಕ ಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯವರು ಈ ದೇವಾಲಯ ಕಟ್ಟಿಸಿದ್ದಾರೆ ಎಂದು ಇತಿಹಾಸ ಹೇಳುತ್ತದೆ.

ದೇವಸ್ಥಾನಗಳ ಸೌಂದರ್ಯ
ಇಲ್ಲಿ ಪುರಾತನ ಶೈಲಿಯ ಸಾಕಷ್ಟು ದೇವಸ್ಥಾನಗಳು ಇವೆ. ಅವುಗಳೆಲ್ಲೂ ಆಗಿನ ಕಾಲದ ಎಂಜಿನಿಯರಿಂಗ್‌ಪ್ಲಾನ್‌ಗಳಿಗೆ ಹಿಡಿದ ಕೈ ಕನ್ನಡಿಯಂತಿದೆ. 67 ಮೀೀಟರ್ ಉದ್ದ, 32 ಮೀಟರ್ ಅಗಲವಾದ ಆಯತಾಕಾರದ ಪ್ರಾಕಾರದ ಅಂಗಳದ ಮಧ್ಯೆ ದೇವಾಲಯದ ಮೂಲ ಘಟಕ ಇದೆ. ಇಲ್ಲಿಂದ ಮುಂದೆ ನಡೆದರೆ ಚೌಕೋನದ ಒಂದು ನಂದಿ ಮಂಟಪ ಇದೆ. ಎತ್ತರದ ಕಟ್ಟೆಯ ಮೇಲೆ 2 ಮೀಟರ್ ಎತ್ತರ 3 ಮೀಟರ್ ಉದ್ದದ ನಂದಿ ವಿಗ್ರಹ ಇದೆ. ಸಭಾಮಂಟಪ 15.2 ಮೀಟರ್ ಉದ್ದ 14.4 ಮೀಟರ್ ಅಗಲ''ದ್ದು 4 ಕಂಭದ ಸಾಲುಗಳನ್ನು ಹೊಂದಿದೆ. ಪ್ರತಿಯೊಂದು ಕಂಬವೂ ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ನೀತಿಕಥೆ, ಪಂಚತಂತ್ರ ಹಾಗೂ ಸಾಮಾಜಿಕ ಸನ್ನಿವೇಶಗಳ ಚಿತ್ರಣದಿಂದ ಕೂಡಿದೆ.

ಹೋಗುವುದು ಹೇಗೆ
ಇದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿದೆ. ತಾಲೂಕು ಕೇಂದ್ರದಿಂದ ಸುಮಾರು 22 ಕೀಮಿ ದೂರ ಸಾಗಿದರೆ, ಈ ದೇವಸ್ಥಾನಗಳನ್ನು ಸಂಧಿಸಬಹುದು. ಅದೇ ರೀತಿ ಇನ್ನೊಂದು ಐತಿಹಾಸಿಕ ಪ್ರವಾಸಿ ತಾಣವಾಗಿರುವ ಐಹೊಳೆಗಿಂತ ಸುಮಾರು 10 ಕೀಮಿ ಹತ್ತಿರದ ಕೇಂದ್ರವೂ ಆಗಿದೆ. ಇಲ್ಲಿಗೆ ಪ್ರಮುಖ ನಗರಗಳಿಂದ ಇಲ್ಲಿಗೆ ಬಸ್ ವ್ಯವಸ್ಥೆ ಇದೆ. ಬಾಗಲಕೋಟೆಗೆ ರೈಲಿನ ಮೂಲಕವೂ ಹೋಗಬಹುದು. ಬಾದಾಮಿಯಿಂದ ಟ್ಯಾಕ್ಸಿ ಮೂಲಕ ಸಾಗುವುದಿದ್ದರೂ ಸಮಯ ಉಳಿಯುವುದು. ಬಾದಾಮಿ ತಾಲೂಕಿನಲ್ಲಿ ಹೋಟೆಲ್ ಗಳಿವೆ. ಇಲ್ಲಿ ಉಳಿದುಕೊಳ್ಳುದು ಉತ್ತಮ ಆಯ್ಕೆಯಾಗಿರುತ್ತದೆ.

(* Posted in service of lord Venkatachala, Tirumala-Tirupati)


--
http://i33.tinypic.com/xdxsvl.jpg

 
NaveenChinthakaaya - Creative Guy.......
http://chinthakaaya.blogspot.com/
http://cid-f2be635aeac89a38.skydrive.live.com/browse.aspx/.Public


'Argument wins the situations but loses the person. So when arguing with your loved ones, remember that situations are not more important than your loved ones...'

No comments:

Post a Comment